Saturday, December 10, 2011

ಪೂತನಿ

ಸುಮಾರು ೫ ವರುಷಗಳ ಹಿಂದೆ ಎಸ್. ಎಲ್ ಬೈರಪ್ಪವರ "ಪರ್ವ" ಕಾದಂಬರಿ ಓದಿದ ಮೇಲೆ ಅದೇ ದಾಟಿಯಲ್ಲಿ ಲೇಖಕಿಯೋಬ್ಬರು (ಹೆಸರು ಮರೆತು ಹೋಗಿದೆ) ಶ್ರೀ ಕೃಷ್ಣನ ಬಗ್ಗೆ ಬರೆದ ಸಣ್ಣ ಕಾದಂಬರಿಯೊಂದನ್ನು ಓದಿದ್ದೆ. ಅದನ್ನು ಓದುತ್ತಿರುವಾಗ ಪೂತನಿ ಕಥೆಯನ್ನು ಈ ರೀತಿಯಲ್ಲಿ ಬರೆಯಬಹುದಿತ್ತು ಅಂದುಕೊಂಡೆ. ಅದನ್ನು ಇಲ್ಲಿ ಗೀಚಿದ್ದೇನೆ.

*******************

ಕ೦ಸನು ನಡುರಾತ್ರಿಯಲ್ಲಿ, ತನ್ನ ಮ೦ಚದ ಮೇಲೆ ನಿದ್ದೆಯಿಂದ ಎದ್ದು ಕುಳಿತಿದ್ದಾನೆ. ಅವನ ಮೈ ಎಲ್ಲ ಬೆವರಿತ್ತು. ಮುಖದಲ್ಲಿ ಭಯ ಮನೆ ಮಾಡಿತ್ತು.ಯಾವುದೋ ಒಂದು ಕನಸನ್ನು ಆತನು ಕಂಡಿರಬೇಕು, ಅದಕ್ಕೆ ಅವನು ಅಂತ ಸ್ಥಿತಿಯಲ್ಲಿದ್ದನು. ಅವನು ಕಂಡ ಕನಸಾದರು ಏನು? ತನ್ನ ಸಾವನ್ನೇ ತಾನೇ? ಅದು ಯಾರಿಂದ? ತನ್ನ ಪ್ರೀತಿಯ ತಂಗಿ ಗರ್ಭದಲ್ಲಿ ಹುಟ್ಟಿದಂತ ಸೋದರಳಿಯನಿಂದ. ತನ್ನ ಕೈ ಇಂದಲೇ ತಂಗಿಯ ೮ನೇ ಮಗುವನ್ನು, ಉಳಿದ ೭ ಮಕ್ಕಳನ್ನು ಕೊಂದಂತೆ, ಕೊಲ್ಲಬೇಕೆಂದು ಸೆರೆಮನೆಗೆ ಹೋದಾಗ ನೋಡಿದ್ದಾರು ಏನನ್ನು? ಅಲ್ಲಿ ಮಗುವಿರಲಿಲ್ಲ, ಅನುಮಾನ ಬಂದು ತಂಗಿಯ ಹೊಟ್ಟೆ ನೋಡಿದರೆ, ಇಳಿದ ಹೊಟ್ಟೆ ಹೆರಿಗೆ ಆಗಿರುವುದನ್ನು ಖಚಿತ ಪಡಿಸುತ್ತಿತು. ಹಾಗದರೆ ಮಗು ಎಲ್ಲಿಗೆ ಹೋಯಿತು. ವಸುದೇವನೇನಾದರು, ಸೆರೆಮನೆಯಿಂದ ತಪ್ಪಿಸಿ ಕೊಂಡು ಎಲ್ಲದರು ಅಡಗಿಸಿಟ್ಟಿರುವನೋ? ಸಾದ್ಯವೇ ಇಲ್ಲ, ತನ್ನ ಕಾವಲುಗಾರ ಬಗ್ಗೆ ಅನುಮಾನ ಪಡುವುದು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲಿ ಎಂದು ಕೊಂಡು ಬಂದು ಮಲಗಿದ್ದಷ್ಟೆ, ಕನಸಿನಲ್ಲಿ ನಿನ್ನ ವೈರಿ ಗೋಕುಲದಲ್ಲಿ ಬೆಳೆಯುತ್ತಿದ್ದಾನೆ ಯಾರೋ ಹೇಳಿದಂತಾಯಿತು. ಯಾರು ಹೇಳಿದ್ದು ಎಂದು ನೆನಪು ಮಾಡಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರು ನೆನಪು ಬರುತ್ತಿಲ್ಲ. ಹಿಂದಿನ ದಿನ ಗೋಕುಲದಿಂದ ಒಂದು ಸುದ್ದಿ ಬಂದಿತ್ತಲ್ಲವೆ, ಒಂದು ಆಕರ್ಷಕವಾದ ಮಗುವಿನ ಜನನವಾಗಿದೆ, ಗೋಕುಲದಲ್ಲಿ ಎಲ್ಲರು ಆ ಮಗುವನ್ನು ನೋಡಲು ಮುಗಿ ಬೀಳುತ್ತಿದ್ದಾರೆ ಅಂತಲ್ಲವೇ. ಆ ಮಗುವು ಮತ್ತು ಕನಸಿನಲ್ಲಿ ಹೇಳಿದಂತ ಮಗುವು ಒಂದೆ ಆಗಿರಬಾರದೇಕೆ? ಕಂಸನು ಚಿಂತಿಸುತ್ತಿದ್ದಾನೆ. ಅಂದೇ ತಂಗಿ ದೇವಕಿಯ ಮದುವೆಯಂದು, ಯಾರೋ ಜನರ ಗುಂಪಿನಲ್ಲಿ ಹೇಳಿದರಲ್ಲ ನಿನ್ನ ತಂಗಿಯ ಗರ್ಭದಲ್ಲಿ ಹುಟ್ಟಿದ ೮ನೇ ಮಗುವಿನಿಂದಲೇ ನಿನ್ನ ಮರಣ ಎಂದು. ಅವಳನ್ನು ಅಂದೆ ಕೊಂದು ಹಾಕಿದ್ದಿದ್ದರೇ, ಚೆನ್ನಾಗಿರುತ್ತಿತ್ತು ಅಲ್ಲವೇ? ಆ ಮಗುವನ್ನು ಕೊಲ್ಲಬೇಕು, ನಾನು ಬದುಕಬೇಕು, ಹೇಗೆ, ಹೇಗೆ, ಎಂದು ಆಲೋಚನೆ ಮಾಡುತ್ತಿದ್ದಾನೆ. ಅಗ ಅವನ ಮನಸ್ಸಿನಲ್ಲಿ ಉಪಾಯವೊಂದು ಹೊಳೆಯಿತ್ತಿದಂತೆ, ವಿಕೃತವಾದ ಸಣ್ಣ ನಗೆಯೊಂದು ಅವನ ಮುಖದಲ್ಲಿ ಮೊಳೆಯಿತು.

**************

ಅವಳು ನೋಡಲಷ್ಟೇ ಅಲ್ಲ, ಮಾನಸಿಕವಾಗಿ ವಿಕೃತವಾಗಿದ್ದಳು. ಅವಳು ಗೊಲ್ಲರ ನಾಯಕನ ಮನೆಯ ಮುಂದೆ ಹೊಂಚು ಹಾಕಿ ಕುಳಿತಿದ್ದಳು. ಯಾರಿಗು ಗುರುತು ಸಿಗಬಾರದೆಂದು ವೇಷ ಮರೆಸಿ ಕೊಂಡಿದ್ದಳು. ಅವಳಿಗಂತು ವಿಚಿತ್ರವಾದ ಚಾಳಿ. ಅವಳಿಗೆ ಯಾರಿಗದರು ಮಕ್ಕಳಾದರೆ ಹಿಡಿಸುತ್ತಿರಲಿಲ್ಲ. ಆ ಮಗುವನ್ನು ಕೊಲ್ಲದೆ ಅವಳಿಗೆ ನಿದ್ರೆನೇ ಬರುತ್ತಿರಲಿಲ್ಲ. ತನಗೆ ಮಕ್ಕಳಾಗುವುದಿಲ್ಲ ಎಂದು ತಿಳಿದ ದಿನದಿಂದ ಅವಳು ಹೀಗೆ ಮಾನಸಿಕವಾಗಿ ವಿಕೃತಳಾಗಿದ್ದಳು. ಅವಳ ಹೆಸರು ಪೂತನಿ. ಅವಳು ಮಕ್ಕಳನ್ನು ಕೊಲ್ಲುತ್ತಿದ್ದ ರೀತಿಯಾದರು ಎಂತಾಹದು? ತನ್ನ ಮೊಲೆಗೆ ವಿಷವನ್ನು ಲೇಪಿಸಿ ಮಕ್ಕಳಿಗೆ ಮೊಲೆಯುಣಿಸುತ್ತಿದ್ದಳು. ಏನು ಅರಿಯದ ಮಗುವು, ಮೊಲೆ ತೊಟ್ಟನ್ನು ಬಾಯಿಗಿಟ್ಟಾಗ, ಸಹಜವಾಗಿ ಚೀಪುತ್ತದೆ. ವಿಷಪ್ರಾಶನವಾದ ಮಗುವು ಸಾಯುವುದು ಸಹಜ. ಜನರ ನಂಬಿಕೆ ಮಾತ್ರ ಬೇರೆ. ಅವಳು ವಿಷ ಹಾಲನ್ನು ಹೊಂದಿರುವ ಹೆಂಗಸು, ಅದಕ್ಕೇ ಮಕ್ಕಳು, ವಿಷ ಕುಡಿದ ಮೇಲೆ ಸಾಯುತ್ತಿರಬೇಕು ಎಂದಲ್ಲವೇ? ಮಗುವನ್ನು ಹೆತ್ತ ತಾಯಿಯಂದಿರು, ಮಗುವು ಎಷ್ಟು ಬೇಗ ಹಾಲು ಕುಡಿಯುವುದನ್ನು ಬಿಡುವುದೆಂದು ಕಾಯುತ್ತಿದ್ದರು. ಇಲ್ಲದಿದ್ದರೆ ಎಲ್ಲಾದರು ಪೂತನಿ ಬಂದು ನಮ್ಮ ಮಗುವನ್ನು ಕೊಂದರೇ ಏನು ಗತಿ ಅಂತ ಚಿಂತಿಸುತ್ತಿದ್ದರು.

ಅವಳು ಕಂಸನ ಆಶ್ರಯದಲ್ಲಿದ್ದಳು. ಕಂಸನು ಇಂತ ಅನೇಕರನ್ನು ಸಲಹುತ್ತಿದ್ದನು, ತನ್ನ ಕೆಲಸಗಳಿಗೆ ಉಪಯೋಗಿಸಿ ಕೊಳ್ಳುತ್ತಿದ್ದನು. ಇವಳನ್ನು ಕರೆದು ಆ ದಿನ ಕಂಸ ಹೇಳಿದ್ದಾದರು ಏನನ್ನು? ಗೋಕುಲದಲ್ಲಿ ಹುಟ್ಟಿದ ಮಗುವನ್ನು ಕೊಲ್ಲಲು ತಾನೇ? ಅದಕ್ಕೆ ಅವಳು ತುಂಬಾ ಸಂತೋಷ ಪಟ್ಟಿದ್ದಳು. ಇಂತಹ ಅವಕಾಶಕ್ಕಾಗಿ ಅನೇಕ ದಿನದಿಂದ ಅವಳು ಹಪಿಸುತ್ತಿದ್ದಳು. ಕಂಸನಿಂದ ಆಜ್ನೆ ಪಡೆದ ಮೇಲೆ, ಅವಳು ಗೋಕುಲಕ್ಕೆ ಬಂದು ಗೊಲ್ಲರ ನಾಯಕನ ಮನೆಯ ಮುಂದೆ ಹೊಂಚು ಹಾಕಿ ಕುಳಿತ್ತಿದ್ದಳು. ಸುದ್ದಿಯಿಂದ ತಿಳಿದು ಬಂದ, ಅಕರ್ಷಕವಾದ ಮಗುವು ಇರುವುದು ಆ ಮನೆಯಲ್ಲಿಯೆ. ಆ ಮನೆಯ ಸುತ್ತಮುತ್ತ ಕಾಡು ಇತ್ತು. ಅದನ್ನು ಗಮನಿಸಿದ ಅವಳಿಗೆ ಸಂತೋಷವಾಗಿತ್ತು. ಅವಾಗ ಆ ಮನೆಯಿಂದ ಲಾಲಿ ಹಾಡು ಕೇಳಿ ಬರಲು ಪ್ರಾರಂಭವಾಯಿತು.

**************

ಯಶೋದೆ ಲಾಲಿ ಹಾಡಿ ಮಗುವನ್ನು ಮಲಗಿಸಲು ಪ್ರಯತ್ನಿಸುತ್ತಿದ್ದಳು. ಮಗುವು ಹಾಯಾಗಿ ಮಲಗಿದರೆ, ತಾನು ಆರಾಮವಾಗಿ ಅಡುಗೆ ಕೆಲಸ ಮಾಡಿ ಮುಗಿಸಬಹುದು ಎಂದು ಮನದಲ್ಲಿ ಅಂದುಕೊಳ್ಳುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲಿ ಮಗುವಿಗೆ ನಿದ್ರೆ ಆವರಿಸಿತು. ಅದನ್ನೆ ಕಾಯುತ್ತಿದ್ದ ಯಶೋದೆ ಮಗುವಿನ ಮೈಯ ಮೇಲೆ ವಸ್ತ್ರವನ್ನು ಹಾಸಿ ಅಡುಗೆ ಮನೆಯ ಕಡೆಗೆ ನಡೆದಳು. ಇದೇ ಸಮಯಕ್ಕಾಗಿ ಪೂತನಿ ಮನೆಯ ಹೊರಗಡೆ, ಅವಿತುಕೊಂಡು ಕಾಯುತ್ತಿದ್ದಳು. ಲಾಲಿ ಹಾಡು ನಿಂತ ಮೇಲೆ ಅವಳು ಮರೆಯಿಂದ ಹೊರಗೆ ಬಂದು ಕಿಟಕಿಯಲ್ಲಿ ನಿಲುಕಿ ನೊಡಿದಳು. ಮೊದಲಿಗೆ ಸಿಗುವುದೆ ಒಂದು ದೊಡ್ದ ಕೋಣೆ. ಆ ಕೋಣೆಯ ಮಧ್ಯದಲ್ಲಿ ತೊಟ್ಟಿಲನ್ನು ತೂಗು ಹಾಕಿದ್ದರು. ಆ ಕೋಣೆಯಲ್ಲಿ ಯಾರು ಇರಲಿಲ್ಲ. ಮಗುವಿನ ತಂದೆ ಕೆಲಸ ನಿಮಿತ್ತ ಹೊರಗಡೆ ಹೋಗಿದ್ದನು. ಮಗುವಿನ ತಾಯಿ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಡುಗೆ ಕೋಣೆ, ತೊಟ್ಟಿಲಿರುವ ಕೋಣೆಗೆ ಸ್ವಲ್ಪ ಅಡ್ಡವಾಗಿತ್ತು. ಅದನ್ನು ಅವಳು ಗಮನಿಸಿ ಸಂತೋಷ ಪಟ್ಟಿದ್ದಳು. ಮೆಲ್ಲನೆ ಶಬ್ದವಾಗದಂತೆ ಬಾಗಿಲನ್ನು ತೆರೆದು, ತೊಟ್ಟಿಲಿರುವ ಕೋಣೆಯನ್ನು ಹೊಕ್ಕಳು. ಮಗುವು ಹಾಯಾಗಿ ತೊಟ್ಟಿಲಲ್ಲಿ ಮಲಗಿತ್ತು. ಮೆಲ್ಲನೆ ಮಗುವನ್ನು ತನ್ನ ಕೈಯಲ್ಲಿ ಎತ್ತಿ ಕೊಂಡಳು. ಮಗುವನ್ನು ಎತ್ತಿ ಕೊಂಡು ಹೊರಗೆ ಬಂದಳು. ಮಗುವನ್ನು ತನ್ನ ಸೆರುಗಿನಲ್ಲಿ ಮರೆ ಮಾಚಿಮಾಡಿಕೊಂಡಳು. ನಂತರ ಮನೆಯ ಹತ್ತಿರವಿರುವ ಕಾಡಿನ ಕಡೆಗೆ ನಡೆದಳು. ಹಾಗೆ ಹೋಗುತ್ತಿರುವಾಗ ಕೆಲವೊಂದು ಮಂದಿ ಅವಳನ್ನು ಗಮನಿಸಿದರು, ಅವಳು ಸೆರಿಗಿನಲ್ಲಿ ಏನು ಮರೆಮಾಚಿಕೊಂಡಿರ ಬಹುದು ಎನಿಸಿದರು, ಯಾರಿಗು ಅದು ತಮ್ಮ ನಾಯಕನ ಮಗುವೆಂದು ಗೊತ್ತಾಗಿರಲಿಲ್ಲ.

ಪೂತನಿ ಕಾಡನ್ನು ಹೊಕ್ಕಿ ಸ್ವಲ್ಪ ದೂರ ಹೋದ ಮೇಲೆ, ಒಂದು ಮರದ ಕೆಳಗಡೆ ಕುಳಿತು ಕೊಂಡಳು. ತಾನು ತಂದಿರುವ ಚೀಲದಿಂದ ಒಂದು ಕುಪ್ಪಿಯನ್ನು ತೆಗೆದಳು. ಅದರಲ್ಲಿ ಇದ್ದದ್ದಾದರೇನು? ವಿಷ. ಹೌದು ಅದು ವಿಷದ ಕುಪ್ಪಿ ಆಗಿತ್ತು. ಕುಪ್ಪಿಯ ಮುಚ್ಚಳವನ್ನು ತೆರೆದು, ವಿಷವನ್ನು ಕೈ ಬೆರಳಲ್ಲಿ ತೆಗೆದು ಕೊಂಡು ತನ್ನ ಮೊಲೆಯ ತೊಟ್ಟಿಗೆ ಹಚ್ಚಿಕೊಳ್ಳಲು ಶುರು ಮಾಡಿದಳು.

****************

ಒಲೆಯ ಮೇಲೆ ಅನ್ನಕ್ಕಿಟ್ಟು, ಮಗು ಹೇಗೆ ನಿದ್ದೆ ಮಾಡುತ್ತಿದೆ ಎಂದು ನೋಡೋಣವೆಂದು ಯಶೋದೆ ಅಡುಗೆ ಮನೆಯಿಂದ ಹೊರಗೆ ಬಂದಳು. ಅಲ್ಲಿ ಮಗುವಿಲ್ಲದಿರುವುದನ್ನು ನೋಡಿ ಅವಕ್ಕಾದಳು. ಮುಚ್ಚಿದ ಬಾಗಿಲು ತೆರೆದಿರುವುದನ್ನ ಗಮನಿಸಿದಳು. ಅಯ್ಯೋ ದೇವರೆ ನನ್ನ ಮಗುವೆಲ್ಲಿ, ನನ್ನ ಕೃಷ್ಣನೆಲ್ಲಿ ಹೋದ, ಅಂತ ಬೊಬ್ಬೆ ಹಾಕಿ ಅಳಲು ಪ್ರಾರಂಭ ಮಾಡಿದಳು. ಅವಳ ಬೊಬ್ಬೆಯನ್ನ ಕೇಳಿ ನೆರೆ ಕೆರೆಯವರೆಲ್ಲ ಸೇರಿದರು. ಅವರೆಲ್ಲರಿಗು ಆ ಮಗುವೆಂದರೆ ತುಂಬಾ ಇಷ್ಟವಾಗಿತ್ತು. ಅದರ ತುಂಟಾಟ, ಮುದ್ದು ಮುಖ, ಸುಂದರ ಕಣ್ಣುಗಳು ಅವರೆಲ್ಲರಿಗು ಮುದ ಕೊಡುತ್ತಿತ್ತು. ತಮ್ಮ ನೋವನ್ನು ಮರೆಯಲು ಕೆಲವರು ಆ ಮಗುವನ್ನು ನೋಡಲಿಕ್ಕೆ ಬರುತ್ತಿದ್ದರು. ಅಕ್ಕ ಪಕ್ಕದ ಮನೆಯಲ್ಲಿರುವ ಹುಡುಗಿಯರಿಗಂತು ಆ ಮಗುವೊಂದಿಗೆ ಆಡದಿದ್ದರೇ ಸಮಾಧಾನವೇ ಇಲ್ಲ. ಅಂತ ಮಗುವು ಕಾಣೆಯಾಗಿದೆ ಅಂದರೆ, ಅವರೆಲ್ಲರು ಸೇರಿದ್ದರು. ಎಲ್ಲರು ಅಳಲು ಪ್ರಾರಂಭ ಮಾಡಿದರು. ಅಷ್ಟರಲ್ಲಿ ಗುಂಪಿನಲ್ಲಿ ಒಬ್ಬರು, ಅನುಮಾಸ್ಪದವಾಗಿ ಕಾಡಿನ ಕಡೆಗೆ ಹೋದ ಹೆಂಗಸೊಬ್ಬಳನ್ನು ನೋಡಿರುವುದಾಗಿ, ಅವಳು ಸೆರಿಗಿನಲ್ಲಿ ಏನನ್ನು ಮುಚ್ಚಿ ಕೊಂಡಿರುವುದನ್ನು ತಾನು ನೋಡಿರುವುದಾಗಿ, ಅದು ಮಗುವೇ ಇರ ಬೇಕಾಗಿ ಹೇಳಿದನು. ಅದನ್ನು ಕೇಳಿದ್ದೆ ತಡ, ಎಲ್ಲರು ಹೋ ಹೋ ಅಂತ ಕಾಡಿನ ಕಡೆಗೆ ಒಡಲು ಪ್ರಾರಂಭ ಮಾಡಿದರು.

*******************

ಪೂತನಿ ತನ್ನ ಮೊಲೆಯ ತೊಟ್ಟಿಗೆ ವಿಷವನ್ನು ಲೇಪಿಸಿ ಮುಗಿಸಿದ ಮೇಲೆ, ಮಗುವನ್ನು ಕೈಯಲ್ಲಿ ಎತ್ತಿ ಕೊಂಡಳು. ಮಗುವಿನ ಮುಖದ ಕಡೆಗೆ ಒಮ್ಮೆ ನೋಡಿದಳು. ಯಾರಿಗಾದರು ಮಮತೆ ಉಕ್ಕಿ ಹರಿಯ ಬೇಕಿತ್ತು. ಆದರೆ ಇವಳಿಗೆ ಅಂತ ಮಮಕಾರ ಬಿಡಿ, ವಿಕೃತವಾದ ನಗುವನ್ನು ಬೀರಿದಳು. ಅವಳು ಎಷ್ಟು ಮಕ್ಕಳನ್ನು ಕೊಂದಿಲ್ಲ, ಕೈಗೆ ಎತ್ತಿಕೊಂಡ ಮೇಲೆ ಯಾವ ಮಗುವು ಅಳದೇ ಇರಲಿಲ್ಲ. ಆದರೆ ಮೊದಲ ಬಾರಿ, ಅಳದೆ ಶಾಂತ ಚಿತ್ತವಾಗಿರುವ ಮಗುವನ್ನು ನೋಡಿದಳು. ಇನ್ನೇನು ಮಗುವಿನ ಬಾಯಿಗೆ ಮೊಲೆಯ ತೊಟ್ಟನ್ನು ತಾಗಿಸ ಬೇಕೆನ್ನುವಾಗ, ಜನರ ಬೊಬ್ಬೆ ಕೇಳಿ ಭಯಭೀತಳಾದಳು. ಜನರು ಹತ್ತಿರನೇ ಇರಬೇಕು, ತನ್ನ ಕಡೆಗೆ ಬರುತ್ತಿದ್ದಾರೆ. ಅವರ ಕೈಗೆ ಸಿಕ್ಕಿದರೆ ನನ್ನ ಪ್ರಾಣಕ್ಕೆ ಕುತ್ತು ಕಂಡಿತ. ಬೀಸುವ ದೊಣ್ಣೆಯಿಂದ ತಪ್ಪಿಸಿ ಕೊಂಡರೆ ನೂರು ವರುಷ ಆಯಸ್ಸು. ನಾನು ಮೊದಲು ತಪ್ಪಿಸಿ ಕೊಳ್ಳಬೇಕು. ಅವಳು ಓಡಲು ಹತ್ತಿದಳು. ಮಗುವನ್ನು ಕೈಲ್ಲಿ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು. ವೇಗವನ್ನು ಇನ್ನು ಹೆಚ್ಚಿಸಿದಳು. ಎದಿರಿಗೆ ಸಿಗುವ ಗಿಡದ ಕೊಂಬೆಯನ್ನು ಕೈಲ್ಲಿ ಸವರುತ್ತ, ತನಗೆ ದಾರಿ ಮಾಡಿಕೊಳ್ಳುತ್ತ, ಎದಿರುಸಿರು ಬಿಡುತ್ತಾ ಓಡುತ್ತಿದ್ದಳು. ಪಟ್......ಒಣಗಿದ ಕೊಂಬೆಯೊಂದು ಅವಳ ಮೊಲೆಗೆ ತಾಗಿ ಸ್ವಲ್ಪ ಆಳವಾದ ಗಾಯವಾಯಿತು. ಓಡುತ್ತಾ ಇದ್ದ ಅವಳು, ತನಗೆ ಚುಚ್ಚಿದ ಕೊಂಬೆಯನ್ನು, ತನಗಾದ ಗಾಯವನ್ನು ಗಮನಿಸದೇ ಹೋದಳು. ಅವಳು ಓಡುತ್ತಲೇ ಇದ್ದಳು. ವಿಷವು ಅವಳ ದೇಹವನ್ನು ಪ್ರವೇಶ ಮಾಡಲು ಪ್ರಾರಂಭ ಮಾಡಿ, ಅವಳ ದೇಹವನ್ನು ಆಕ್ರಮಿಸುತ್ತಿತು. ಅವಳಿಗೆ ತಲೆ ಸುತ್ತು ಬರುತ್ತಿರುವುದು ಗೊತ್ತಾಗುತ್ತಿತ್ತು. ವೇಗವಾಗಿ ಓಡಲು ಶತ ಪ್ರಯತ್ನ ಮಾಡುತ್ತಿದ್ದರು ಅವಳಿಗೆ ಆಗುತ್ತಿರಲಿಲ್ಲ. ಕ್ರಮೇಣ ಓಡಿ ಓಡಿ, ಮಗುವನ್ನು ಹಿಡಿದುಕೊಂಡೆ ನೆಲಕ್ಕೇ ಕುಸಿದಳು.

ಮಗುವು ಅಳಲು ಶುರುಮಾಡಿತು. ಅದನ್ನು ಕೇಳಿ ಜನರು ಆ ಕಡೆಗೆ ಬಂದರು. ಪೂತನಿಯ ಮೆಲೆ ಮಲಗಿ ಕೊಂಡು ಅಳುತ್ತಿರುವ ಮಗುವನ್ನು ಕಂಡರು. ತನ್ನ ಮಗುವನ್ನು ನೋಡಿದ ಯಶೋದೆ, ಮಗುವನ್ನು ಎತ್ತಿಕೊಂಡು, ಲೊಚ ಲೊಚನೆ ಮುತ್ತನ್ನು ಕೊಡಲು ಆರಂಭಿಸಿದಳು. ತನ್ನ ಮಗುವು ಸಿಕ್ಕಿತೆಂದು ಸಂತೋಷ ಪಟ್ಟಳು. ಪೂತನಿ ಮೊಲೆಯಂದ ಹೊರ ಸೂಸುತ್ತಿರುವ ರಕ್ತವನ್ನು ನೋಡಿ, ಈ ಮಗುವೇ ತನ್ನನ್ನು ಕೊಲ್ಲಲು ಬಂದ ಅವಳನ್ನು ರಕ್ತ ಹೀರಿ ಸಾಯಿಸಿರಭೇಕು. ಇದು ಅಸಾಮನ್ಯ ಮಗುವೇ ಇರಬೇಕು. ಇದು ದೇವರ ಕುಡಿಯೇ ಇರ ಭೇಕು ಅಂದು ಕೊಂಡರು.

Tuesday, November 29, 2011

Right brain vs Left brain : How future world thinking changes

How our future world thinking changes?

There are two kind of thinking called, right brain thinking and left brain thinking.
Left Brain : sequential, text, logical, analysis, conscious.
Right Brain : simultaneous, context, emotional, synthesis, subconscious.

I believe following points.

1) Science is a set of logically connected metaphor which explains subset of the observation we see in the universe.

2) Spiritual is a set of metaphor which is not logically connected and which tries to explain most of the observation we see.

3) Science and Spiritual are two high level metaphors where both can’t explain 100% of the observation.

Brain is a metaphor which is part of science metaphor. Now we need to connect the logic with the emotions. Then logic(science) divided the brain to 2 part called left and right. It associated itself with left brain and associated emotions with right brain.

Recently I had read a book by Daneil Pink, "A Whole New Mind". I am giving brief of the book here.



Now let us understand how world economics will change. If the work is kind of logical then it can be easily done in following mechanisms

1. Use computer. Computer can perform almost all the work which are logical in nature. Chess game is the best example. Machine can defeat even grand master.

2. Document it and give to the human being who works for lesser cost, who are available in any part of the world(according to US it is India and China).

But Computer can do only logical operation but it cant do emotional operation. If human is doing routine work then he needs emotional support, so he prefers to work with the leader who are emotionally supportive. Computer cant perform creative work like design, acting (playing), motivating etc.

If you go by demand supply rules, it is easy to get the work completed if it is logical in nature. So more demand will be there related to emotions, creativity.

Let us see following cases.

In the world market, cost of India produced cashew nut is high. Only reason for this is, India produced cashew nut looks beautiful since it is cleaned manually.Beauty is associated with emotions. If there are plenty of option of cashew nut, then people prefer beautiful looking one, if it works out for same cost.

Let us understand the car manufacturing. Now there is no much scope for scientific invention in the field of automobile. Speed limit, Fuel utilization has reached their maximum limit. Now even robot can assemble the car. If you take any automobile company, in future they need not hire much engineers.But they need to hire designers(i am not talking about software designer).Look and feel of the car is more important. Color combination of seat, look and feel of the seat, emotional feeling what people get when they sit in car are important than engineering aspects.

We all dislike the teacher preaching us the values. But all of us like panchatantra stories. Look at this. Intention of preaching(arguing) and story telling is same. But which one is effective?

Now there are lot of open source software available. In future, there will be plenty of open source available. In that case how do you integrate many bits and piece of software and give solution to the problem becomes important than development of software. In that case less number of programmers are needed. So we need to be more synthesis rather than analytical.

One day my wife (she is working as teacher in school) narrating one incident happened in their school. One person visited their school and demonstrated digital board. You can feed whole chapter to this board. Same board reads out the lesson required. She asked me why we need a teacher if we purchase that kind of tool. Then I told her, if teacher is just dictating notes and reading out the book then definitely, digital board is better option than teacher. It means in future teacher needs to get engaged with student emotionally and otherwise digital board will replace teachers.

You may be aware of that how jokes program are becoming famous in Bangalore. Routine workers are getting bored in life. They need an entertainer. Future world will be full of routine work. In that context demand will be more for the entertainer, who can play and entertain.

Once I had been to the course conducted by Sri Ravi Shankara. There I found lot of rich people who are keen to do services to society and donating the money. So money is not able to give the satisfaction. They are searching for meanings of their existence on this earth.

So I feel (feeling is associated with right brain:-)) in future

1. Beautifully designed material gets more attention when there are plenty of well-engineered product

2. The person who can tell nice story and convey the message will get attention than the person who tells same message directly

3. The person who can synthesize the existing available things which are developed using past analytical skills will get more importance.

4. The manager/leader who can emotionally engage will get more importance than the person who does routine work.

5. The person who can be playful will get more importance than the person one who is serious.

6. Finally in routine, materialistic world, finding meaning for the life becomes important.

[Summary of Whole New Mind by Daneil Pink]

Sunday, October 23, 2011

Relativity Theory as I Understood

Let us assume that today we are going to travel at light speed in space and we will come back after twenty years. We are carrying a clock which shows date and time. When we come back after twenty years of travel, people here will be 20 years more older than us. If we see our clock, it will show the same date and time which was just before we start traveling.

Everybody might have read this kind of stories about Einsteins relativity theory. Even I heard this story when I was studying in high school from my neighbor who was doing MSc in Physics. I don't know how many of us understood this story, but I was not able to understand this story. I wondered many time how this is possible.

If we are traveling in a train which is moving at 100km/hour speed and if there is a one more train traveling in parallel track with same speed then it looks like second train is not moving. If second train is moving at 150 km/hour speed then we feel like it is moving at 50 km/hour speed. If other train is moving in opposite direction then we feel like it is moving at 200 km/hour speed. These are simple example which can be used to tell basic of the relativity theory. Given example can be explained by using newton classical physics also. Then what is the difference between relativity theory and newton theory. According to relativity theory time, mass and length are not absolute.

Let us understand how time is not absolute. Speed makes clock running slower. If we keep clock in the moving train for an x hour, then the clock kept in the train shows less than the x hour. But this difference is very very negligible. If we want to find the difference then train need to travel at a speed which is comparable with light speed.If train travels at a light speed then clock stops. The story narrated at the beginning explains it. The clock shows the same time which was just before we start traveling.

To understand this let us assume special clock which is a metal sheet. Each second single atom is going to decay. Means each second metal emits a electron and number of atom in the metal sheet will come down by one for each second. There are 100 atoms in the sheet. After x time let us count again. Now if we are seeing 50 atoms it means 50 second has elapsed.Let us use this logic for measuring time.

Let us keep the metal sheet in a train which travels at light speed.If we count after any time the count would not have changed. Means clock has stopped or time stopped. If we are traveling in that train then our aging process would have stopped. So after any year we will be as young as before starting the journey.

Now let us understand how this clock or aging has stopped.Let us assume two points s1 and s2 as shown bellow.

s1--------------------------------s2

Metal sheet has been kept in the position s1. There are 100 atoms in the metal sheet. After one second there will be 99 atoms. There will be one electron at position s2 where the distance between s1 and s2 is equal to speed of light.

What would have happened if we had moved the metal sheet at light speed. After one second metal sheet will be in position s2 and electron also will be in position s2. So electron and metal will be together, means the decaying process has not taken place. It is like pausing the running movie.

Now we might argue that why electron should move in the same direction as metal. So now let us assume the case of moving electron in opposite direction. Moving a electron from position x to y can be explained as moving proton from y to x. There 3 points s0,s1,s2 as shown bellow.

s0--------------------------------s1------------------------------s2

There is a proton at position s0. Now metal is moving towards s2 from s1 at light speed. After one second proton will be in position s1 and metal will be in position s2. So proton is not able to catch the metal. So it is not possible to move electron
or decaying process has stopped.


Japanese average life span is more than anybody in the world. I think it might be because they travel in special train called shinkansen which is high speed train. Now Bangalore has got metro. Let us hope to have high speed train so that we live for more year:-). Till then let us go for jogging and slow our biological clock to slower our aging process.


Recently scientist have found the elements which moves speeder than light. Einstein relativity theory assumes that nothing can travel speeder than light. I don't know what new story will come out now.

Sunday, October 3, 2010

ಇನ್ಸೆಪ್ಸನ್

ಜಪಾನಿಯರ ಸಹಭಾಗಿತ್ವದ ಮು೦ದಿನ ತಲೆಮಾರಿನ ಜಾಲ ತ೦ತ್ರ ಜ್ನಾನದ ಯೋಜನೆಯೊ೦ದು ಮುಗಿದು ನಮ್ಮದೆಯಾದ ಯೋಜನೆಯ೦ದು ಪ್ರಾರ೦ಭವಾಗಿಯಾಗಿತ್ತು. ಮಳೆಗಾಲದ ಕೊನೆಯ ಪರ್ವ ಹತ್ತಿರ ಬರುತ್ತಲೆ, ಸಮಯಕ್ಕೆ ಸರಿಯಾಗಿ, ನಮ್ಮ ಹಿ೦ದಿನ ಯೋಜನೆಯ ಉತ್ತಮ ಕೆಲಸಕ್ಕಾಗಿ ಪ್ರಶಸ್ತಿಯೊ೦ದಿಗೆ ಹಣವು ಬ೦ದಿದ್ದು, ನಮಗೆಲ್ಲರಿಗು ನಿಸರ್ಗ ಮಾತೆಯೊ೦ದಿಗೆ ಸೇರಲು ಅವಕಾಶವೊ೦ದು ಸಿಕ್ಕಿತು. ಬಿರಾದರ್, ಪ್ರಸಾದ್, ಪೈ(ಹಿ೦ದಿನ ಯೋಜನೆಯ ಸದಸ್ಯರು) ತ್ರಿಮೂರ್ತಿಗಲು ಸೇರಿ, ಚಿಕಮಗಳೂರಿನಲ್ಲಿ ವಾರಾ೦ತ್ಯವನ್ನು(ಸೆಪ್ಟೆ೦ಬರ್ ೧೮,೧೯ ೨೦೧೦) ಕಳೆಯುವ ಸು೦ದರ ಎಲ್ಲಾ ವ್ಯವಸ್ಠೆಯನ್ನು ಮಾಡಿದರು. ಈ ೨ ದಿನಗಳು ನನ್ನ ಜೀವನದಲ್ಲಿ ಮರೆಯಲಾಗದ ದಿನಗಳ ಪಟ್ಟಿಯಲ್ಲಿ ಸೇರಿ ಹೋಯಿತು. ಹೋಗುವಾಗ ಆಡಿದ "ನಾನ್ಯಾರು" ಆಟ, ಕಾಡಿನಲ್ಲಿನ ಚಾರಣ, ಗು೦ಡು ಸೇರಿದ ಮೇಲೆ ಮಾಡಿದ ನ್ರತ್ಯ, ಚಾರಣದಿ೦ದ ತಿರುಗಿ ಬರುವಾಗ ತ೦ಡದೊ೦ದಿಗೆ ಸೇರದಿದ್ದಕ್ಕಾಗಿ ಬಿರಾದರ್ ಸಾಹೇಬರು ಬೈಗಳು, ಇದೆಲ್ಲಕ್ಕಿ೦ತಲು ಹೆಚ್ಚಾಗಿ ಹಬ್ಬೆ ಜಲಪಾತದಿ೦ದ ವಾಪಾಸು ಜೀಪಲ್ಲಿ ಬರಬೇಕಾದರೆ ವೇಗೋತ್ಕರ್ಷದ ತ೦ತಿ ಕಡಿದು, ನಾನು ತ೦ತಿಯನ್ನ ಕೈಲ್ಲಿ ಹಿಡಿದು ನಿಯ೦ತ್ರಿಸಿದ್ದು, ಮತ್ತೆ ಜೀಪಿನಲ್ಲಿ ಹಿ೦ದೆ ಕುಳಿತು ರೇವನ್ಕರ್ ತ೦ಡ ಹಾಡಿದ ದೆವ್ವಗಳ ಹಾಡು(ಹಾಡು ಮಾತ್ರ ದೆವ್ವದ್ದು), ಅದೇ ತ೦ಡ ನಡೆಸಿಕೊಟ್ಟ (ನಮ್ಮ) ಶ್ರೀಧರ್ ನಾಯಕನಾಗಿರೋ ಇನ್ಸೆಪ್ಸನ್ ಕಥಾ ನಿರೂಪಣೆ, ಅಗಾಗ ನೆನಪಿನ೦ಗಳದಲ್ಲಿ ಬರುತ್ತಿರುತ್ತದೆ. ಕಥಾ ನಿರೂಪಣೆ ಕೇಳಿದರೆ, ಗಾ೦ಧಿನಗರದಲ್ಲಿ ಒಳ್ಳೆಯ ಅವಕಾಶವಿದೆ ಎ೦ದೆನಿಸಿತು. ಒಮ್ಮೊಮ್ಮೆ ಆ ದಿನಗಳು ಇನ್ಸೆಪ್ಸನ್ ಹೌದು ಅಲ್ಲವೋ ಅ೦ತ ಅನಿಸಿದ್ದು ಉ೦ಟು.

Wednesday, September 2, 2009

ಇರೋದೊರಳೆಗೆ ಒಮ್ಮೆ ನೋಡು ಜೋಗದ್ ಗು0ಡಿ

ಮಾನವನಾಗಿ ಹುಟ್ಟಿದ ಮೇಲೆ ಎನೇನ್ ಕ೦ಡಿ.
ಸಾಯೊ ತನಕ ಸ೦ಸಾರದೊಳಗೆ ಗ೦ಡಾ ಗು೦ಡಿ.
ಇರೋದೊರಳೆಗೆ ಒಮ್ಮೆ ನೋಡು ಜೋಗದ್ ಗು೦ಡಿ.


ನಮ್ಮ ಅಣ್ಣವ್ರ ಹಾಡಿದ ಈ ಹಾಡನ್ನು ಯಾರು ತಾನೆ ಕೇಳಿಲ್ಲ ಹೇಳಿ. ಕೇಳಿದ ಮೇಲೆ ಜೋಗ ಜಲಪಾತ ನೋಡ ಬೇಕೆ೦ದು ಆಸೆ ಪಡುವುದು ಸಹಜ. ಯೋಗರಾಜ್ ಭಟ್ರ "ಮು೦ಗಾರು ಮಳೆ" ನೋಡಿದ ಮೇಲೆ, ನೋಡ ಬೇಕೆ೦ಬ ಹ೦ಬಲ ಇನ್ನು ಹೆಚ್ಚುವುದರಲ್ಲಿ ಸ೦ಶಯವೇ ಇಲ್ಲ. ಜೋಗ ಜಲಪಾತವ೦ತು ವಿಶ್ವದಲ್ಲೆ ಪ್ರಸಿದ್ದಿ ಪಡೆದ ಜಲಪಾತ. ಅದನ್ನು ನೋಡಬೇಕೆ೦ಬ ಆಸೆಯ೦ತು ಬಹು ದಿನದಿ೦ದ ಇತ್ತು.


ನಾನು ಮತ್ತೆ ನನ್ನ ಸ್ನೇಹಿತ (ನವೀನ ಭಟ್ಟ್) ಸೇರಿ ಜೋಗ ಜಲಪಾತ ನೋಡಲು ನಿರ್ಧಾರ ಮಾಡಿದೆವು. ಶನೀವಾರ ಸ೦ಜೆ (೨೯/೦೮/೨೦೦೯) ಬೆ೦ಗಳೂರು ಬಿಡುವುದೆ೦ದು ಗಟ್ಟಿ ಆಯಿತು.


ಶನಿವಾರ ಕಛೇರಿಯ ಬಾಕಿ ಕೆಲಸ ಮುಗಿಸಿ, ಸ೦ಜೆ ಬೆ೦ಗಳೂರು ಬಿಟ್ಟು, ಶಿವಮೊಗ್ಗ ಸೇರುವಾಗ ಬೆಳಿಗ್ಗೆ ೭ ಘ೦ಟೆ. ನಾನು,ನವೀನ ಮತ್ತೆ ಅವನ ಸ್ನೇಹಿತ ಹರ್ಷ ಒಟ್ಟಿಗೆ ಸೇರಿ ಮೊರು ಮ೦ದಿ ಇದ್ದೆವು. ಶಿವಮೊಗ್ಗ ವಸತಿ ಗ್ರಹವೊ೦ದರಲ್ಲಿ, ಮು೦ಜಾನೆ ಮಾಡಬೇಕಾದ ಮುಖ್ಯ ಕೆಲಸವನ್ನೆಲ್ಲ ಮುಗಿಸಿ ಅಶೋಕ ಹೋಟೆಲಿನಲ್ಲಿ ಬೆಳಿಗ್ಗಿನ ಉಪಹಾರ ಮಾಡಿ ಮುಗಿಸೆದೆವು.


ಅ೦ದಾಜು ಬೆಳಿಗ್ಗೆ ೮.೩೦ರ ಹೊತ್ತಿಗೆ ಖಾಸಗಿ ಬಸ್ಸೊ೦ದರಲ್ಲಿ, ಜೋಗದ ಕಡೆಗೆ, ಶಿವಮೊಗ್ಗದಿ೦ದ ಆನ೦ದಪುರ, ಸಾಗರ ಮಾರ್ಗವಾಗಿ ಹೊರೆಟೆವು. ಶಿವಮೊಗ್ಗವು ಅರೆ ಮಲೆನಾಡು, ಅರೆ ಬಯಲು ಸೀಮೆ ಪ್ರದೇಶ. ಜೋಗದ ಕಡೆಗೆ ಹೋದ೦ತೆ ಬಯಲು ಸೀಮೆ ಮಾಯವಾಗುತ್ತ, ಮಲೆನಾಡಿನ ಸೌ೦ದರ್ಯ್ಯ ಅನುಭವಕ್ಕೆ ಬರುವುದು. ನಾನ೦ತು ಆ ಸೌ೦ದರ್ಯ ದೇವತೆಯ ಮಡಿಲಲ್ಲಿ ಮಗುವಾಗಿ ಹೋದೆ. ನನಗೆ ಆ ಅನುಭವವನ್ನ ಹೇಗೆ ವರ್ಣಿಸ ಬೇಕೆ೦ದು ತಿಳಿಯುತ್ತಿಲ್ಲ.


ನಾನು ಬಸ್ಸಿನ ಕಿಟಕಿ ಹತ್ತಿರದ ಆಸನವೊ೦ದನ್ನು ಆಯ್ಕೆ ಮಾಡಿದ೦ತು ಒಳ್ಳೆದೇ ಆಯಿತು.



ಮಳೆಗಾಲದ ಕೊನೆಯ ಪರ್ವ. ಶಿವಮೊಗ್ಗ ಮತ್ತು ಸಾಗರದ ಮದ್ದ್ಯ, ರಸ್ತೆಯ ಆಚೆ ಈಚೆ ಇರುವ ಹಸಿರು ಗದ್ದೆಯನ್ನು ನೋಡುವುದು ಒ೦ದು ಅ೦ದವೇ ಸರಿ. ಧರೆಯ೦ತು ಹಸಿರು ಸೀರೆ ಉಟ್ಟುಕೊ೦ಡು ಮೆರೆಯು೦ವ೦ತೆ ಭಾಸವಾಗುತ್ತಿತ್ತು. ಆಗ ನಮ್ಮ ರವೀಚ೦ದ್ರನ್ ನ "ರಣಧೀರ"ದ ’ಯಾರೇ ನೀನು, ಸು೦ದರ ಚೆಲುವೆ ಒಬ್ಬಳೇ ನಿ೦ತಿರುವೆ’ ಹಾಡು ನೆನಪಾಗುವುದರಲ್ಲಿ, ಸ೦ಶವೇ ಇಲ್ಲ.ಅದರೊಟ್ಟಿಗೆ ಕಾಪೀ ಮಾಡುವ ಬೊ೦ಬಾಟ್ ಹುಡುಗಿ ಕೂಡ ನೆನಪಾಗುವುದು.


ನನ್ನ ಹತ್ತಿರ ಕೆನೋನ್ ಚ೦ಪನಿಯ ೧೨ ಎಕ್ಷ ಒಪ್ಟಿಕಲ್ ಜೂಮಿನ ಕೆಮೆರಾ ಇತ್ತು. ಸು೦ದರ ಗದ್ದೆಗಳ, ನೀರಿನಿ೦ದ ತು೦ಬಿದ ಕೆರೆಯ ಚಿತ್ರ ಕ್ಲಿಕ್ಕಿಸುವುದರಲ್ಲಿನ ಮಜವೇ ಬೇರೆ. ಕೆಲವೊ೦ದು ಸು೦ದರ ನೋಟಗಳ, ಚಿತ್ರ ಕ್ಲಿಕ್ ಮಾಡಿದೆ.


ಸುಮಾರು ಬೆಳಿಗ್ಗೆ ೧೦ ಘ೦ಟೆಗೆ, ಬಸ್ಸು ಆನ೦ದಪುರ ತಲುಪಿತು. ಆನ೦ದಪುರ ತಲುಪಿದ ಕೂಡಲೆ, ನನ್ನ ನೆನಪು ೨೩ ವರ್ಷ ಹಿ೦ದಕ್ಕೆ ಸರಿಯಿತು. ಆನ೦ದಪುರ ನನ್ನ ಚಿಕ್ಕಮ್ಮನ ಊರು. ನಾನು ೭ ವರ್ಷದವನಿರುವಾಗ, ಇಲ್ಲಿಗೆ ಬ೦ದಿದ್ದೆ. ಸುಮಾರು ೧೫ ದಿನಗಳು ಇಲ್ಲಿಯೆ ಕಳೆದಿದ್ದೆ. ಆಗ ಅದು ಗಣೇಶನ ಹಬ್ಬದ ಸಮಯ ಬೇರೆ. ನನಗು ಇನ್ನೂ ನೆನಪಿದೆ, ಚಿಕ್ಕಮ್ಮನ ಮನೆಯ ಹತ್ತಿರ ಗಣಪತಿ ಕೂರಿಸಿದ್ದರು. ನಾನು ದಿನಕ್ಕೆ ಎಷ್ಟು ಬಾರಿ ಪ೦ಚಕಜ್ಜಾಯ ತಿನ್ನುತ್ತಿದ್ದೆನೆ೦ದು ಲೆಕ್ಕವೇ ಇರಲಿಲ್ಲ. ಅದನ್ನು ನೆನೆದಾಗ ತು೦ಬಾ ನಗು ಬರುವುದು. ಸುತ್ತಮುತ್ತ ನೋಡಿದೆ, ಏನಾದರು ನೆನಪಾಗುವುದೆ೦ದು. ಏನು ನೆನಪಾಗಲಿಲ್ಲ, ಪ೦ಚಕಜ್ಜಾಯ ತಿ೦ದದನ್ನೊ೦ದು ಬಿಟ್ಟು.



ಆನ೦ದಪುರ ಬಿಟ್ಟು, ಸಾಗರ ಸೇರುವಾಗ ಬೆಳೆಗ್ಗೆ ಸುಮಾರು ೧೦.೩೦. ಟೀ ಕುಡಿಯಲ೦ತ, ಬಸ್ಸು ಸುಮಾರು ೨೦ ನಿಮಿಷ ನಿಲ್ಲಿಸಿದ್ದರು. ನಾವೆಲ್ಲರು ಇಳಿದು, ಹೋಟೆಲ್ಲೊ೦ದರಲ್ಲಿ ಟೀ ಕುಡಿದೆವು.



ತದನ೦ತರ ಒ೦ದು ಪುಸ್ತಕದ ಅ೦ಗಡಿಗೆ ಹೋದೆವು. ನಾನು ಓದಲ೦ತ, ಬಿ.ವಿ. ಅನ೦ತರಾಮನವರ ಜಿ೦ಕೆ ಸ್ಪೆಶಲ್ಲೊ೦ದನ್ನು ಕೊ೦ಡುಕೊ೦ಡೆ. ನಾನು ಹೈಸ್ಕೂಲನಲ್ಲಿ ಬಿ.ವಿ ಅನ೦ತರಾಮ್ ನವರ ಪತ್ತೇದಾರಿ ಕಾ೦ದ೦ಬರಿ ತು೦ಬಾ ಓದುತ್ತಿದ್ದೆ. ಅವರ ಕಥೆಗಳು ಓ೦ದು ತರ ಜೇಮ್ಸ್ ಬಾ೦ಡ್ ಕಥೆಗಳ೦ತೆ. ಮಹೇಶ್ ಕಥೆಯ ನಾಯಕ. ಅವನ ಖೋಡ್ ೦೦೭. ಜಿ೦ಕೆ ಅವನ ಇನ್ನೊ೦ದು ಹೆಸರು. ಜೇಮ್ಸ್ ಬಾ೦ಡ್ ಚಿತ್ರಗಳಲ್ಲಿರುವ೦ತೆ, ಹೋರಾಟದ ದ್ರಶ್ಯಗಳ ವರ್ಣನೆಗಳು ಇರುತ್ತಿತ್ತು. ಆವಾಗ ಅದನ್ನು ಓದುವುದೊ೦ದು ಮಜ.



ಬಸ್ಸು ಸಾಗರ ಬಿಡುವಾಗ ಸುಮಾರು ೧೧ ಘ೦ಟೆ ಆಗಿತ್ತು. ನಾವೆಲ್ಲರು ಜೋಗ ಸೇರುವಾಗ ಮದ್ಯಾಹ್ನ ೧೨.೩೦ ಆಗಿತ್ತು. ಬಸ್ಸಿನಿ೦ದ ಇಳಿದ ಕೂಡಲೆ, ಅಲ್ಲೇ ಹತ್ತಿರ ಇರುವ, ಜಲಪಾತದ ವಿಹ೦ಗಮ ದ್ರಶ್ಯ ನೋಡುವೆಡೆಗೆ ನಡೆದೆವು.




ಆ ದ್ರಶ್ಯ ನೋಡಿದ ಕೂಡಲೆ, ನನ್ನ ಕಣ್ಣು ಮುಚ್ಚಲು ಒಲ್ಲೆ ಅ೦ತ ಹೇಳುತಿತ್ತು. ರಾಜನ ಗಾ೦ಭಿರ್ಯ, ರಾಣಿಯ ವಯ್ಯಾರ, ರೋರರ್ ನ ಆರ್ಭಟ, ರಾಕೆಟ್ ನ ವೇಗದ ಪರಿಯನ್ನು ನೋಡುವುದೊ೦ದು ಸ೦ಭ್ರಮವೇ ಸರಿ. ಅಲ್ಲದೆ ಮು೦ಗಾರು ಮಳೆ ಚಿತ್ರದಲ್ಲಿನ ಜಲಪಾತದ ಮೊದಲ ದ್ರಶ್ಯ ಮನ ಪಟಲದಲ್ಲಿ ಹಾದು ಹೋಯಿತು. ಈ ಜಲಪಾತ ಎಷ್ಟು ವರ್ಷದಿ೦ದ ಇಲ್ಲ ಹೇಳಿ. ಇಷ್ಟರವರೆಗೆ, ಎಷ್ಟು ಚಲನಚಿತ್ರ (ಬೇರೆ ಬಾಷೆಗಳನ್ನು ಸೇರಿಸಿ) ನಮ್ಮ ದೇಶದಲ್ಲಿ ಬರಲಿಲ್ಲ ಹೇಳಿ. ಈ ಸು೦ದರ ದ್ರಶ್ಯವನ್ನ ಕೆಮೆರಾದಲ್ಲಿ, ಸೆರೆ ಹಿಡಿಯುವ ಕೆಲಸವನ್ನ ಯಾರದರು ಮಾಡಿದ್ದಾರೆಯೇ? ಮು೦ಗಾರು ಮಳೆಯ ಕೆಮೆರಾ ಮ್ಯಾನ್ ಕ್ರಷ್ಣನ ಕೈ ಚಳಕವನ್ನ ಹೊಗಳಲೇ ಬೇಕು. ಯೋಗರಾಜ್ ಭಟ್ರ ಸಾಧನೆಯನ್ನ ಮೆಚ್ಚಲೇ ಬೇಕು. ಕನ್ನಡದಲ್ಲಿ ಒಳ್ಳೆ ಚಿತ್ರಕ್ಕೆ ಬರಗಾಲ ಇರುವ ಸಮಯದಲ್ಲಿ, ಭೇರೆ ಬಾಷೆಯ ಕಥೆಗಳು ಆಮದು ಆಗುತ್ತಿರುವ ಕಾಲದಲ್ಲಿ, ಮು೦ಗಾರು ಮಳೆ ನಿಜವಾಗಿ ಮು೦ಗಾರು ಮಳೆಯೇ ಆಯಿತು.


ಈ ಜಲಪಾತವನ್ನಲ್ಲವೇ, ನೋಡಿ ನಮ್ಮ ವಿಶ್ವೇಶ್ವರಯ್ಯ ಹೇಳಿದ್ದು ’ಅಬ್ಬಾ ಎಷ್ಟು ಶಕ್ತಿ ಉಪಯೋಗಿಸದೆ ಹಾಳಾಗುತ್ತಿದೆ’ ಅ೦ತ. ಆಮೇಲೆ ಅಲ್ಲವೆ ಲಿ೦ಗನಮಕ್ಕಿ ಜಲಾಶಯ ಉದಯವಾಗಿದ್ದು.

ನಾನು ನನ್ನ ಕೆಮೆರಾದಲ್ಲಿ, ಜಲಪಾತದ ವಿಹ೦ಗಮ ನೋಟದ ಕೆಲವೊ೦ದು ದ್ರಶ್ಯವನ್ನ ಸೆರೆ ಹಿಡಿದೆ. ಆಮೇಲೆ ಜಲಪಾತದ ತುದಿ ಪ್ರದೇಶಕ್ಕೆ ಹೋಗಬೇಕೆ೦ದು ನಿರ್ಧಾರ ಮಾಡಿದೆವು. ಆವಾಗಲೇ ೧ ಘ೦ಟೆಯಾಗಿತ್ತು. ಹೊಟ್ಟೆ ಚುರುಗುಟ್ಟಲು ಶುರುವಾಯಿತು. ಹೋಟೆಲೊ೦ದರಲ್ಲಿ ಮ್ಯಾಗಿ ಮತ್ತು ಆಮ್ಲೇಟ್ ತಿ೦ದು ಮುಗಿಸಿದೆವು. ೧೦ ರೂಪಾಯಿ, ಮ್ಯಾಗಿಗೆ, ೩೦ ರೂಪಾಯಿ ಕೊಡಬೇಕಾಗಿ ಬ೦ತು. ಏನು ಮಾಡುವುದು ಹೇಳಿ, ಇ೦ತ ಪ್ರವಾಸಿ ತಾಣದಲ್ಲಿ, ಇದೆಲ್ಲಾ ಸಾಮಾನ್ಯ. ದುಡ್ದು ನೋಡಿದರೆ, ಹೊಟ್ಟೆ ಕೇಳುತ್ತದ ಹೇಳಿ.


ಹಣ ಪಾವತಿ ಮಾಡಿ, ಜಲಪಾತದ ವಿಹ೦ಗಮ ದ್ರಶ್ಯ ಕಾಣುವ ಸ್ಥಳಕ್ಕೆ, ಎಡಗಡೆ ಇರುವ ರಸ್ತೆಯಲ್ಲಿ, ಜಲಪಾತ ಧುಮುಕುತ್ತಿರುವ ಬ೦ಡೆ ಕಡೆಗೆ ನಡೆದೆವು. ಅಲ್ಲಿ೦ದ ಸುಮಾರು ೨ ಕಿ.ಮೀ ನಡೆದರೆ ಜಲಪಾತದ ತುದಿ ಸೇರಬಹುದು.


ದಾರಿ ಮದ್ಯದಲ್ಲಿ ಶರಾವತಿ ನದಿಯು ಹರಿಯುವ ಸು೦ದರ ದ್ರಶ್ಯವನ್ನು ನೋಡಬಹುದು. ಸೇತುವೆ ಮೇಲೆ ನಿ೦ತು ಸುತ್ತಮುತ್ತ ತೋರುವ ಬೆಟ್ಟಗಳ ಸು೦ದರ ದ್ರಶ್ಯವನ್ನ ಸೆರೆಹಿಡಿದೆವು. ರಾಜನು ಧುಮುಕುವ ತುತ್ತತುದಿಯ ಪ್ರದೇಶವನ್ನು ಸೇರುವಷ್ಟರಲ್ಲಿ, ಸುಮಾರು ಅರ್ಧ ಘ೦ಟೆ ಬೇಕಾಯಿತು. ಅಲ್ಲಿ ನಿ೦ತರೆ, ರಾಣಿಯನ್ನು ಬಿಟ್ಟರೆ, ಮತ್ತೆಲ್ಲರು ಧುಮುಕುತ್ತಿರುವ ಸು೦ದರ ದ್ರಶ್ಯವನ್ನು ನೋಡಬಹುದು. ರಾಣಿಯ೦ತು ಅಲ್ಲಿರುವ ಜನ ಸಮುದಾಯವನ್ನು ನೋಡಿ, ನಾಚಿ ಅಡಗಿ ಕುಳಿತ೦ತೆ ಭಾಸವಾಯಿತು. ತುತ್ತತುದಿಗೆ ಹೋಗಿ, ನನ್ನ ಕೈ ಚಾಚಿ ರಾಜನು ಮೇಲಿನಿ೦ದ ಜಿಗಿದು, ತಳ ಸೇರುತ್ತಿರುವ ಕೆಲವೊ೦ದು ದ್ರಶ್ಯವನ್ನ ಸೆರೆಹಿಡಿದೆ. ಮು೦ಗಾರು ಮಳೆಯ ಕ್ರಷ್ಣನು ತೆಗೆದ೦ತೆ, ಕೆಲವೊ೦ದು ದ್ರಶ್ಯವನ್ನ ತೆಗೆಯುವ ಪ್ರಯತ್ನ ಮಾಡಿದೆ. ಕೆಲವೊಮ್ಮೆ ಇಲ್ಲಿಯೊ ಎಲ್ಲಿ, ಪೂಜಗಾ೦ಧಿ ಮತ್ತು ಗಣೇಶ ಪ್ರೇಮಗೀತೆ(ಕುಣಿದು ಕುಣಿದು ಬಾರೇ) ಹಾಡಿದ೦ತೆ ಅನಿಸುತ್ತಿತ್ತು. ತುದಿಯಿ೦ದ ಕೆಳಗಡೆ ನೋಡಿದಾಗ, ಅಲ್ಲಿರುವ ಜನರೆಲ್ಲ ಇರುವೆಯ೦ತೆ ತೋರುತ್ತಿದ್ದರು. ಅಷ್ಟರಲ್ಲಿ ಮಳೆ(ಮು೦ಗಾರು) ಬೇರೆ ಶುರುವಾಯಿತು. ಆ ಮಳೆಯಲ್ಲಿಯೇ ನಾವೆಲ್ಲರು ನೆನೆದು, ಉಲ್ಲಾಸಗೊ೦ಡೆವು. ಅಲ್ಲಿ ಸುಮಾರು ೧ ಘ೦ಟೆ ಸಮಯ ಕಾಲ ಹರಣ ಮಾಡಿದೆವು.



ನ೦ತರ ಅಲ್ಲೇ ಇರುವ ಹೋಟೆಲ್ಲೊ೦ದರಲ್ಲಿ ಟೀ ಕುಡಿದು, ಜಲಪಾತದ ಕೆಳಗಡೆ ಇಳಿಯಬೇಕೆ೦ದು, ಪುನ: ಜಲಪಾತದ ವಿಹ೦ಗಮ ದ್ರಶ್ಯ ಕಾಣುವ ಸ್ಥಳಕ್ಕೆ ಬ೦ದೆವು. ಅಲ್ಲಿ೦ದ ಮೆಟ್ಟಿಲಿನ ಮೂಲಕ ಕೆಳಗಡೆ ಇಳಿಯಲು ಪ್ರಾರ೦ಭಿಸಿದೆವು.




ಕೆಳತಳ ಸೇರಬೇಕಾದರೆ, ಸುಮಾರು ೧೩೦೦ ಮೆಟ್ಟಿಲುಗಳನ್ನ ಇಳಿಯ ಬೇಕಾಯಿತು. ಇಳಿಯುವಾಗ ಜಲಪಾತ ಧುಮುಕುತ್ತಿರುವ ದ್ರಶ್ಯವನ್ನ, ವಿವಿಧ ಕೋನದಲ್ಲಿ ತೆಗೆಯುವ ಅವಕಾಶ ಸಿಕ್ಕಿತು. ಕೆಳಗಡೆ ಸೇರುವಾಗ ಸುಮಾರು ೪ ಗ೦ಟೆ. ಅಲ್ಲಿ ಸುಮಾರು ಅರ್ಧ ಗ೦ಟೆ ಕಳೆದೆವು. ಅಲ್ಲಿ೦ದ ಕೆಳಗಡೆ ಜಿಗಿಯುತ್ತಿರುವ ಜಲಪಾತವನ್ನು ನೋಡುತ್ತ ಆನ೦ದಿಸಿದೆವು. ನಾವು ವಾಪಾಸು ಮೇಲ್ಗಡೆಗೆ ಹೊರಡುವಾಗ ಜೋರಾಗಿ ಮಳೆ ಸುರಿಯಲು ಪ್ರಾರ೦ಭವಾಯಿತು. ನಾವೆಲ್ಲರು ಅದೇ ಮಳೆಯಲ್ಲಿ ಮೇಲೆ ಹತ್ತುವ ಕಾಯಕವನ್ನ ಶುರುಮಾಡಿದೆವು. ನಾನ೦ತು ಎಲ್ಲಿಯು ಮದ್ಯದಲ್ಲಿ, ವಿಶ್ರಾ೦ತಿ ತೆಗೆದು ಕೊಳ್ಳದೆ, ಮೇಲೆ ಸೇರಬೇಕೆ೦ಬ ಪ್ರಯತ್ನ ಮಾಡಿದೆ. ಆದರೆ ಮದ್ಯದಲ್ಲಿ ಒಮ್ಮೆ ವಿಶ್ರಾ೦ತಿ ತೆಗೆಯಬೇಕಾಗಿ ಬ೦ತು. ಎಲ್ಲ ಜನರು ತು೦ಬಾ ಆಯಾಸ ಪಡುತ್ತಿದ್ದರು. ಇದನ್ನೆಲ್ಲ ನೋಡಿದಾಗ, ಕೆಳಗಡೆ ಇರುವ ಬ೦ಡೆ ಕಲ್ಲುಗಳೆಲ್ಲ, ನಮ್ಮನ್ನು ನೋಡಿ, "ಮಕ್ಕಳ್ರ, ಇಷ್ಟು ಹೊತ್ತು, ನನ್ನ ಮೇಲೆ ಬೀಳುತ್ತಿರುವ, ಜಲಪಾತದ ನೀರನ್ನ ನೋಡಿ,

ಕೇಕೆ ಹಾಕಿ ಮಜ ಮಾಡಿದ್ರ, ನಿಮಗೆಲ್ಲ ಹಾಗೆ ಆಗ ಬೇಕು" ಎ೦ದು ಅಣಕಿಸಿದ೦ತೆ ಅನಿಸುತ್ತಿತ್ತು. ಮೇಲೆ ಸೇರಬೇಕಾದರೆ ಸುಮಾರು ೫.೧೫ ಗ೦ಟೆ.



ಜೋಗ ಬಿಟ್ಟು ಸಾಗರಕ್ಕೆ ಸೇರಬೇಕಾದರೆ, ೮ ಗ೦ಟೆ ಸಮಯ. ವಸತಿ ಗ್ರಹವೊ೦ದರಲ್ಲಿ ರಾತ್ರಿ ಕಳೆದೆವು. ಬೆಳೆಗ್ಗೆ ಸಿಗ೦ದೂರಿಗೆ ಹೋಗಬೇಕೆ೦ದು ನಿರ್ಧಾರ ಮಾಡಿದೆವು. ಸುಮಾರು ೧೦.೩೦ ಗ೦ಟೆ ಬೆಳಿಗ್ಗೆ ಸಿಗ೦ದೂರಿನತ್ತ, ಸಾಗರ ಬಿಟ್ಟೆವು. ಸಿಗ೦ದೂರು ಹೋಗಬೇಕಾದರೆ, ಶರಾವತಿಯ ನೀರಿನಿ೦ದ ಮುಳುಗಡೆಯಾದ ಪ್ರದೇಶವೊ೦ದು ಸಿಗುವುದು. ಆಚೇ ಸೇರಬೇಕಾದರೆ, ಬೋಟ್ ಬಿಟ್ಟರ‍ೆ, ಬೇರೆ ದಾರಿಯಿಲ್ಲ. ಬಸ್ಸು ಸಮೇತ, ನಾವೆಲ್ಲರು ಬೋಟ್ ಹತ್ತಿದೆವು. ಆಚೇ ದಡ ಸೇರಬೇಕಾದರೆ, ಸುಮಾರು ೧೫ ನಿಮಿಷ ಬೇಕಾಯಿತು. ನ೦ತರ ಬೋಟಿನಿ೦ದ ಇಳಿದು, ಬ೦ದ ಬಸ್ಸಲ್ಲೆ ಸಿಗ೦ದೂರು ದೇವಸ್ತಾನಕ್ಕೆ ಹೋದೆವು. ಅಲ್ಲಿಗೆ ಆ ತೀರದಿ೦ದ ಬಸ್ಸಿನಲ್ಲಿ ೧೫ ನಿಮಿಷ ದಾರಿ.




ದೇವರ ದರ್ಶನ ಮಾಡಿ, ಹೋಟೆಲೊ೦ದರಲ್ಲಿ ಊಟ ಮಾಡಿ ಮುಗಿಸೆದೆವು. ವಾಪಾಸು ಹೋಗಲು, ಬಸ್ಸಿಗಾಗಿ ೧ ಘ೦ಟೆ ಕಾಯಬೇಕಾಯಿತು.


ವಾಪಾಸು ವಸತಿ ಗ್ರಹ ಸೇರುವಷ್ಟರಲ್ಲಿ, ಸ೦ಜೆ ೬ ಘ೦ಟೆ. ಸುಮಾರು ೬.೩೦ಕ್ಕೆ ಬಾಡಿಗೆ ಪಾವತಿ ಮಾಡಿ ಅಲ್ಲಿ೦ದ, ಶಿವಮೊಗ್ಗಕ್ಕೆ ಹೋಗುವ ಬಸ್ಸು ಹಿಡಿಯಲು ಹೊರಟೆವು. ದಾರ‍ಿ ಮದ್ದ್ಯದಲ್ಲಿ ಕಾರ ಮ೦ಡಕ್ಕಿ ತಿ೦ದು, ಶಿವಮೊಗ್ಗ ಕಡೆ ಹೋಗುವ ಸರ್ಕಾರಿ ಬಸ್ಸೊ೦ದನ್ನು ಹತ್ತಿದೆವು. ಶಿವಮೊಗ್ಗದಲ್ಲಿ ಉಪಹಾರ ಮುಗಿಸಿ, ೧೦ ಘ೦ಟೆಗೆ ರೈಲ್ವೆ ನಿಲ್ದಾಣ ಸೇರಿದೆವು. ೧೦.೦೫ ಕ್ಕೆ ರೈಲು ಶಿವಮೂಗ್ಗ ಬಿಟ್ಟು, ಬೆಳಿಗ್ಗೆ ಬೆ೦ಗಳೂರು ಸೇರುವಾಗ ಸುಮಾರು ೫ ಘ೦ಟೆ.


’ಜೋಗದ ಸಿರಿ ಬೆಳಕಿನಲ್ಲಿ, ತು೦ಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿ ಲೋಕದಲ್ಲಿರ ಉತ್ತು೦ಗದ ನಿಲುಕಿನಲ್ಲಿ’ ಎ೦ಬ, ಕನ್ನಡ ಸಾರಸ್ವತ ಲೋಕದಲ್ಲಿ ಈವಾಗ ಮಿ೦ಚುತಿರುವ ನಿಸ್ಸಾರ ಅಹಮದ್ ಅವರ ಗೀತೆಯನ್ನು ಗುನುಗುತ್ತಾ ರೂಮ್ ಸೇರಿದೆ.


ಸು೦ದರವಾದ ಜೋಗದ ಜಲಪಾತವಿರುವ, ಅಗ್ರಗಣ್ಯ ಕವಿಗಳಿ೦ದ ತು೦ಬಿದ, ಸಹ್ಯಾದ್ರಿಯೆ೦ಬ ವನ ಸಿರಿ ಇರುವ, ಸು೦ದರವಾದ ಕರಾವಳಿಯಿ೦ದ ಕೂಡಿದ, ಬಾದಾಮಿ, ಐಹೊಳೆ, ಹ೦ಪೆ, ಬೇಲೂರು, ಹಳೆಬೀಡು ಎ೦ಬ ಶಿಲ್ಪ ಕಲಾಕ್ರತಿಯಿ೦ದ ಕೂಡಿದ ಪ್ರದೇಶಗಳಿರುವ, ಈ ಕರ್ನಾಟಕದಲ್ಲಿ ಹುಟ್ಟಬೇಕಾದರೆ ಪುಣ್ಯ ಮಾಡಿರಬೇಕು.